ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ- ಸ್ವಾತಂತ್ರ್ಯ ದಿನಾಚರಣೆ

ಶ್ರೀ ಮಾಧವ ಗೌಡ ಬೆಳ್ಳಾರೆ, ಖಜಾಂಚಿ ದ.ಕ ಗೌಡ ವಿದ್ಯಾ ಸಂಘ (ರಿ)ಸುಳ್ಯ. ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು. ಸಂಸ್ಥೆಯ ಸಂಚಾಲಕರಾದ ಶ್ರೀ ಯು ಪಿ ರಾಮಕೃಷ್ಣ, ದ.ಕ.ಗೌಡ ವಿಧ್ಯಾ ಸಂಘದ ಜೊತೆ ಕಾರ್ಯದರ್ಶಿ ಶ್ರೀ ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ಸಂಸ್ಥೆಯ ನಿರ್ದೇಶಕರಾದ ಶ್ರೀ ಚಿದಾನಂದ ಬೈಲಾಡಿ, ನಿವೃತ್ತ ಕಛೇರಿ ಅಧೀಕ್ಷಕರಾದ ಶ್ರೀ ಉಮೇಶ್ ಯಂ. ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಪ್ರಕಾಶ್ ಪೈ ಬಿ. ಸಂಸ್ಥೆಯ ಅಧ್ಯಾಪಕ ಮತ್ತು ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ ಯಲ್ಲಿ ಕ್ಯಾಂಪಸ್ ಉದ್ಯೋಗ ಸಂದರ್ಶನ

ಬೆಂಗಳೂರಿನಲ್ಲಿ  ಹಲವು ಶಾಖೆಯುಳ್ಳ ವಿದ್ಯುಧ್ದಿಕರಣ, ಹೈ ವೋಲ್ಟೇಜ್ , ಟ್ರಾನ್ಸಪೊರ್ಮರ್ , ಅಟೋಮೇಶನ್ , ಪವರ್ ಇಲೆಕ್ಟ್ರಾನಿಕ್ಸ್,  ಗ್ರೀನ್ ಎನರ್ಜಿ ಮುಂತಾದ  ಕ್ಷೇತ್ರಗಳ ತಂತ್ರಜ್ಞಾನದಲ್ಲಿ  ಜಗತ್ತಿಗೆ  ಹೆಸರುವಾಸಿಯಾದ ಜಪಾನ್ ದೇಶದಲ್ಲಿ ಮುಖ್ಯ ಶಾಖೆ ಇರುವ ಬಹುರಾಷ್ಟ್ರೀಯ  ಹಿಟಾಚಿ  ಎನರ್ಜಿ  ಕಂಪೆನಿಗೆ ಜೂನ್ 6  ರಂದು  ವಿದ್ಯಾರ್ಥಿಗಳ ಕ್ಯಾಂಪಸ್ ಉದ್ಯೋಗ ಸಂದರ್ಶನ ಕಾರ್ಯಕ್ರಮವು ಸಂಸ್ಥೆಯ ಕೌಶಲ್ಯ ಸಭಾಭವನದಲ್ಲಿ ನಡೆಯಿತು.  ಸದ್ರಿ ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ಐಟಿಐ ಕೊಂಬೆಟ್ಟು ಪುತ್ತೂರು, ಸರ್ಕಾರಿ ಮಹಿಳಾ ಐಟಿಐ ನರಿಮೊಗರು. ಸರ್ಕಾರಿ ಐಟಿಐ ವಿಟ್ಲ.   ಸುಪ್ರಜಿತ ಐಟಿಐ ವಿಟ್ಲ.  ಇವುಗಳಿಂದ ಎಲೆಕ್ಟ್ರಿಷಿಯನ್, ಇಲೆಕ್ಟ್ರಾನಿಕ್ಸ್ ಮೆಕಾನಿಕ್  ವೃತ್ತಿಗಳ  ಸುಮಾರು 102 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ ಯಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ

ಪುತ್ತೂರು. ಕೊಂಬೆಟ್ಟಿನ  ಶ್ರೀ ಮಹಾಲಿಂಗೇಶ್ವರ ಐಟಿಐ ಯು ಡ್ರಾಫ್ಟ್ ಮೆನ್ ಸಿವಿಲ್, ಎಲೆಕ್ಟ್ರಿಷಿಯನ್ ಮತ್ತು ಇಲೆಕ್ಟ್ರಾನಿಕ್ಸ್ ಮೆಕಾನಿಕ್ ವೃತ್ತಿಗಳಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು, ಬಹುರಾಷ್ಟ್ರೀಯ ಕಂಪನಿ ಬೆಂಗಳೂರಿನಲ್ಲಿರುವ ಹಿಟಾಚಿ, ಬೆಂಗಳೂರಿನ ಇಂಡೋ ಮೀಮ್, ಟೊಯೋಟಾ ಕಿರ್ಲೋಸ್ಕರ್, ಮಹಿಂದ್ರ, ಸಂಪತ್ ಕುಮಾರ್ ಅಸೋಸಿಯೇಟ್ಸ್, ಸಿದ್ಧಿವಿನಾಯಕ ಅಸೋಸಿಯೇಟ್ಸ್, ಮೈಸೂರಿನ ಆಟೋಮೋಟಿವ್ ಏಕ್ಷಲ್  ಲಿಮಿಟೆಡ್ ಏಷ್ಯನ್ ಪೈಂಟ್ಸ್. ಮಂಗಳೂರಿನ ಧರ್ಮರಾಜ್ ಅಸೋಸಿಯೇಟ್ಸ್ , ಪೈಲ್ಯಾಂಡ್ ಅಸೋಸಿಯೇಟ್ಸ್ . ಆಳ್ವಾ ಅಸೋಸಿಯೇಟ್ಸ್  ಮುಂತಾದ ಸಂಸ್ಥೆಗಳು ನಡೆಸಿದ ಕ್ಯಾಂಪಸ್ ಉದ್ಯೋಗ ಸಂದರ್ಶನದಲ್ಲಿ ಆಯ್ಕೆ ಆಗಿದ್ದಾರೆ. ಸಿವಿಲ್ ವೃತ್ತಿಯ ಅಶ್ವಿತ್, ಅವಿನ್ ಕೆ, ಅವೀಶ್, ಮೋಹನ್ ಕುಮಾರ್, ಚಿಂತನ್, ದೀಪಿಕಾ, ದುರ್ಗಾಪ್ರಸಾದ್ ,ಕಿಶೋರ್, ಲಾವಣ್ಯ,  ಯಂ ಆರ್ ಸುಜೀತ್, ಮಹಮ್ಮದ್ ಅಪೀಜ್,  ಮಹಮ್ಮದ್  ಫೈಜ್, ಮಹಮ್ಮದ್ ರಿಹಾನ್, ಮನೋಜ್ ವಿ.ಕೆ , ಮಹಮ್ಮದ್  ಹುನೈಸ್, ಪ್ರೀತಮ್, ಸತ್ಯಜಿತ್, ಸ್ನೇಹಿತ್  ,  ಸುಮಂತ್, ವರ್ಷಿತ್ ,  ಇಲೆಕ್ಟ್ರೀಯನ್ ವಿಭಾಗದ ಭವಿಷ್, ದೀಕ್ಷೀತ್, ಧನುಷ್ ಕುಮಾರ್,  ಧನುಷ್, ಹಿತೇಶ್ ಕುಮಾರ್, ಕಿರಣ್ , ಲತೇಶ್, ಲಿಖಿತ್, ಮನೀಷ್, ಮನೀಷ್ ಗೌಡ, ನೀಕ್ಷೀತ್, ನಿತೇಶ್ ಕೆ, ನಿತಿನ್, ಪ್ರಸನ್ನ, ಪ್ರತೀಶ್, ರಂಜನ್, ಶ್ರೇಯಸ್ ಕುಮಾರ್, ತೇಜಸ್, ವರುಣ್ ಕೆ., ವರುಣ್, ಇಲೆಕ್ಟ್ರಾನಿಕ್ಸ್ ಮೆಕಾನಿಕ್ 2 ನೇ ವಿಭಾಗದ ಆಕಾಶ್, ದೀಕ್ಷಿತ್, ಧನು, ಗಗನ್ ಕೆ, ಜಯಪ್ರಸಾದ್, ರಂಜಿತ್, ಲೋಹಿತ್,  ಕುಮಾರಿ ಮೋಕ್ಷ, ಮೋಕ್ಷಿತ್, ಪ್ರಮೋದ್, ರಕ್ಷಿತ್, ರಂಜಿತ್, ಸಮರ್ಥ್, ಶರಣ್ ರಾಜ್, ಶ್ರೇಯಸ್, ವೀಕ್ಷಿತ್, ವಿನೀತ್, ವೀಶಾಕ್, ಯಕ್ಷಿತ್, ಯತೀಶ್, ಮತ್ತು ಇಲೆಕ್ಟ್ರಾನಿಕ್ಸ್ ಮೆಕಾನಿಕ್ 4 ನೇ ವಿಭಾಗದ ಅಕ್ಷತ್, ಅಂಕಿತ್, ಚೇತನ್, ಧನುಷ್, ಹರ್ಷೀತ್, ಜ್ಞಾನೇಶ್, ಕರುಣಾಕರ, ಮಹಮ್ಮದ್ ಸುಜಾತ್, ನಂದನ್, ನಿಖಿಲ್ ಕುಮಾರ್, ಪ್ರಜ್ವಲ್, ಪುನೀತ್, ರೋಹಿತ್ ಬಂಗೇರ, ರೋಶನ್, ಶರತ್ ಕುಮಾರ್, ಶಾರ್ವಿನ್ ಡಿಸೋಜಾ, ತೇಜಸ್, ತಿಲಕ್, ತ್ರಿಲೋಕ್, ಉದಯಕುಮಾರ್, ವಿಜೇಶ್, ವಿನೀತ್ ಕುಮಾರ್ ಆಯ್ಕೆಯಾಗಿದ್ದಾರೆ.

ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ ಯಲ್ಲಿ ಕ್ಯಾಂಪಸ್ ಉದ್ಯೋಗ ಸಂದರ್ಶನ

ಬೆಂಗಳೂರಿನಲ್ಲಿ ಶಾಖೆಯುಳ್ಳ  ಏರೋಸ್ಪೇಸ್ , ಆಟೋಮೋಟಿವ್, ಡಿಫೆನ್ಸ್, ಇಂಡಸ್ಟ್ರಿಯಲ್, ವೈದ್ಯಕೀಯ , ಗ್ರಾಹಕ  ಮುಂತಾದ  ಕ್ಷೇತ್ರಗಳಲ್ಲಿ ಹೆಸರುವಾಸಿಯಾದ ಬಹುರಾಷ್ಟ್ರೀಯ   ಇಂಡೊ ಮೀಮ್ ಪ್ರೈವೇಟ್ ಲಿಮಿಟೆಡ್ ಕಂಪೆನಿಗೆ  ಮೇ 12  ರಂದು  ವಿದ್ಯಾರ್ಥಿಗಳ ಕ್ಯಾಂಪಸ್ ಉದ್ಯೋಗ ಸಂದರ್ಶನ ಕಾರ್ಯಕ್ರಮವು ಸಂಸ್ಥೆಯ ಕೌಶಲ್ಯ ಸಭಾಭವನದಲ್ಲಿ ನಡೆಯಿತು.  ಸದ್ರಿ ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ಐಟಿಐ ಕೊಂಬೆಟ್ಟು ಪುತ್ತೂರು, ಸರ್ಕಾರಿ ಮಹಿಳಾ ಐಟಿಐ ನರಿಮೊಗರು. ಸರ್ಕಾರಿ ಐಟಿಐ ವಿಟ್ಲ.   ಸುಪ್ರಜಿತ ಐಟಿಐ ವಿಟ್ಲ.  ಇವುಗಳಿಂದ ಎಲೆಕ್ಟ್ರಿಷಿಯನ್, ಇಲೆಕ್ಟ್ರಾನಿಕ್ಸ್ ಮೆಕಾನಿಕ್  ವೃತ್ತಿಗಳ 224 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ- ಜಂಟಿ ನಿರ್ದೇಶಕರ ಬೇಟಿ

ಶ್ರೀ ಮಹಾಲಿಂಗೇಶ್ವರ ಐಟಿಐ ಅಖಿಲ ಭಾರತ ವೃತ್ತಿ ಪರೀಕ್ಷಾ ಕೇಂದ್ರಕ್ಕೆ  ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮೈಸೂರು ವಿಭಾಗದ ಮುಖ್ಯಸ್ಥರು ಹಾಗೂ   ಜಂಟಿ ನಿರ್ದೇಶಕರಾದ ಶ್ರೀಮತಿ ಮಂಜುಳಾ ಯೆಸ್ ರವರು ದಿನಾಂಕ 22-07-2025 ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದ ಶ್ರೀ ಯು.ಪಿ. ರಾಮಕೃಷ್ಣ, ಸಂಸ್ಥೆಯ ನಿರ್ದೇಶಕರಾದ ಶ್ರೀ ಚಿದಾನಂದ ಬೈಲಾಡಿ. ಪರೀಕ್ಷಾ ಕೇಂದ್ರದ ಅಧ್ಯಕ್ಷರಾದ ಸರ್ಕಾರಿ ಐಟಿಐ ವಿಟ್ಲದ ಪ್ರಾಚಾರ್ಯರಾದ ಶ್ರೀ ಹರೀಶ್.    ಪರೀಕ್ಷಾ ವೀಕ್ಷಕರಾದ ಸಾರ್ವಜನಿಕ ಶಿಕ್ಷಣ ಇಲಾಖೆಯ ಶ್ರೀ ನವೀನ್ ವೇಗಸ್, ಸಂಸ್ಥೆಯ ಪ್ರಾಚಾರ್ಯರಾದ ಪ್ರಕಾಶ್ ಪೈ ಬಿ.  ಜಿಲ್ಲೆಯ ವಿವಿಧ ಸಂಸ್ಥೆಗಳಿಂದ ನಿಯೋಜಿತ ಪ್ರಾಯೋಗಿಕ ಪರೀಕ್ಷಕರು, ಸಂಸ್ಥೆಯ ಅಧ್ಯಾಪಕ ಮತ್ತು ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ -ಅಖಿಲ ಭಾರತ ವೃತ್ತಿ ಪರೀಕ್ಷೆ ಪ್ರಾರಂಭ

 ಶ್ರೀ ಮಹಾಲಿಂಗೇಶ್ವರ ಐಟಿಐ ಯ ಪರೀಕ್ಷಾ ಕೇಂದ್ರದಲ್ಲಿ ನಾಳೆ ಗುರುವಾರ ದಿನಾಂಕ 17-7-2025 ರಿಂದ ಅಖಿಲ ಭಾರತ ವೃತ್ತಿ ಪರೀಕ್ಷೆ ಆರಂಭವಾಗಲಿದ್ದು ಪುತ್ತೂರು ಶ್ರೀ ಮಹಾಲಿಂಗೇಶ್ವರ ಐಟಿಐ, ವಿಟ್ಲದ ಸರ್ಕಾರಿ ಐಟಿಐ, ವಿಟ್ಲದ ಸುಪ್ರಜಿತ್ ಐಟಿಐ ಮತ್ತು ಒಡಿಯೂರಿನ ಗುರುದೇವಾನಂದ ಐಟಿಐ ಗಳ ವಿವಿಧ ವೃತ್ತಿಗಳ ಒಟ್ಟು 488 ವಿದ್ಯಾರ್ಥಿಗಳು  ಪರೀಕ್ಷೆಗೆ ಹಾಜರಾಗಲಿದ್ದಾರೆ. ಸರ್ಕಾರಿ ಐಟಿಐ ವಿಟ್ಲದ ಪ್ರಾಚಾರ್ಯರಾದ ಶ್ರೀ ಹರೀಶ್ ರವರು ಪರೀಕ್ಷಾ ಕೇಂದ್ರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ – ಮಾದಕ ವಸ್ತು ಜಾಗ್ರತಿ ಕಾರ್ಯಕ್ರಮ

ಮಾದಕ ವಸ್ತು ವ್ಯಸನದಿಂದ ಸಮಾಜದ ಸ್ವಾಸ್ಥ್ಯ ನಾಶವಾಗುತ್ತದೆ. ಹೆಚ್ಚಾಗಿ ವಿದ್ಯಾರ್ಥಿಗಳು ಮತ್ತು ಯುವಜನತೆ ವ್ಯಸನಕ್ಕೆ ಒಳಗಾಗುತ್ತಾರೆ ಎಂದು  ಪುತ್ತೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಶ್ರೀಮತಿ ದಿವ್ಯಶ್ರೀ ಬಿ. ಹೆಚ್. ಹೇಳಿದರು. ಅವರು ಶ್ರೀ ಮಹಾಲಿಂಗೇಶ್ವರ ಐಟಿಐಯ ಕೌಶಲ್ಯ ಸಭಾಭವನದಲ್ಲಿ ಸೆಪ್ಟೆಂಬರ್ 22 ರಂದು ವಿದ್ಯಾರ್ಥಿಗಳಿಗಾಗಿ ನಡೆದ  ಮಾದಕ ವಸ್ತು -ಜಾಗ್ರತಿ ಕಾರ್ಯಕ್ರಮದಲ್ಲಿ  ಭಾಗವಹಿಸಿ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ನಡೆಸಿದರು . ಅಬಕಾರಿ ನಿರೀಕ್ಷಕರಾದ ಶ್ರೀಮತಿ ಜೋಸ್ಲಿನ್ ಟಿ ಫೆರ್ನಾಂಡಿಸ್ ವಿವಿಧ ರೀತಿಯ ಮಾದಕ ವಸ್ತುಗಳು ಮತ್ತು ಅವುಗಳ ಪ್ರಭಾವ ಮತ್ತು ದುಷ್ಪರಿಣಾಮದ ಬಗ್ಗೆ  ಬಹು ಮಾಧ್ಯಮದ ಮೂಲಕ ವಿವರಿಸಿದರು. ಕಾರ್ಯಕ್ರಮದಲ್ಲಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಅಬಕಾರಿ ಇಲಾಖೆಯ ಸಿಬ್ಬಂದಿಗಳಿಂದ ಮಾದಕ ವಸ್ತುಗಳ ವಿತರಣೆಯಲ್ಲಿ ಅಮಾಯಕ ಸಾರ್ವಜನಿಕರನ್ನು ಹೇಗೆ ಬಳಿಸಿಕೊಳ್ಳುತ್ತಾರೆ ಮತ್ತು  ತಿಳಿದು ಅಥವಾ ತಿಳಿಯದೆ ಈ ಜಾಲದಲ್ಲಿ ಸಿಕ್ಕಿಹಾಕಿಕೊಂಡು ಶಿಕ್ಷೆಗೆ ಗುರಿಯಾಗುವ ಕುರಿತು ಪ್ರಹಸನ ಕಾರ್ಯಕ್ರಮವನ್ನು ಮನೋಜ್ಞ ಅಭಿನಯದಿಂದ ನಡೆಸಿಕೊಟ್ಟರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಚಾಲಕರಾದ ಶ್ರೀ ಯು.ಪಿ. ರಾಮಕೃಷ್ಣ ರವರು ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದ ಅವಶ್ಯಕತೆಯ ಬಗ್ಗೆ ಮಾಹಿತಿ ನೀಡಿ ಸದಾಶಯ ವ್ಯಕ್ತಪಡಿಸಿದರು.  ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಪ್ರಕಾಶ್ ಪೈ ಬಿ . ಸ್ವಾಗತಿಸಿ , ನಿರೂಪಿಸಿದರು. ಅಬಕಾರಿ ಇಲಾಖೆಯ ಶ್ರೀ ಪ್ರೇಮಾನಂದ ಕಾರ್ಯಕ್ರಮ ಸಂಯೋಜಿಸಿದ್ದರು ,ಸಂಸ್ಥೆಯ ಅಧ್ಯಾಪಕ ಮತ್ತು ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

76 ನೇ ಗಣರಾಜ್ಯೋತ್ಸವ ಆಚರಣೆ

ಸಂಸ್ಥೆಯ ನಿರ್ದೇಶಕರಾದ ಶ್ರೀ ಚಿದಾನಂದ ಬೈಲಾಡಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು. ಸಂಸ್ಥೆಯ ಸಂಚಾಲಕರಾದ ಶ್ರೀ ಯು.ಪಿ.ರಾಮಕೃಷ್ಣ ಮತ್ತು  ವಿಶ್ರಾಂತ ಪ್ರಾಚಾರ್ಯ ಶ್ರೀ ಭವಾನಿ ಗೌಡ ಶುಭ ಹಾರೈಸಿದರು. ಸಂಸ್ಥೆಯ ಎಲ್ಲಾ ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಸಹಕರಿಸಿದರು. ಸಂಸ್ಥೆಯ ಪ್ರಾಚಾರ್ಯ ಶ್ರೀ ಪ್ರಕಾಶ್ ಪೈ ಕಾರ್ಯಕ್ರಮ ನಿರೂಪಿಸಿದರು ಮತ್ತು ತರಬೇತಿ ಅಧಿಕಾರಿ ಶ್ರೀಮತಿ ವಸಂತಿ ವಂದಿಸಿದರು.

Anti crime monthly program by Police Sub Inspector of Puttur Town Station Sri Anjaney Reddy.

ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ-ಆಯುಧ ಪೂಜೆ

ದಿನಾಂಕ 10-10-2024 ಗುರುವಾರ ದಂದು ಸಂಸ್ಥೆಯಲ್ಲಿ ಆಯುಧ ಪೂಜೆ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಗಣಪತಿ ಹೋಮ, ಶಾರದಾ ಪೂಜೆ ಮತ್ತು ಕಾರ್ಯಾಗಾರದಲ್ಲಿ ಯಂತ್ರೋಪಕರಣ, ಹಾಗೂ ವಾಹನಗಳಿಗೆ ಆಯುಧ ಪೂಜೆ ನಡೆಯಿತು. ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸೀತಾರಾಮ ಕೇವಳ, ದ .ಕ. ಗೌಡ ವಿದ್ಯಾಸಂಘ, ಸುಳ್ಯ ಇದರ ಅಧ್ಯಕ್ಷರಾದ ಶ್ರೀ ಧನಂಜಯ ಅಡ್ಪಂಗಾಯ , ಮಾಜಿ ಶಾಸಕ ಮತ್ತು ಸಂಸ್ಥೆಯ ನಿರ್ದೇಶಕರಾದ ಶ್ರೀ ಸಂಜೀವ ಮಠಂದೂರು , ಎ.ವಿ.ಜಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಶ್ರೀ ಎ.ವಿ. ನಾರಾಯಣ್, ಭಾರತ್ ಎಂಟರ್ಪ್ರೈಸಸ್ ಮಾಲಕರಾದ ಶ್ರೀಮತಿ ಕೃಷ್ಣವೇಣಿ , ದ.ಕ. ಗೌಡ ವಿಧ್ಯಾಸಂಘದ ಕೋಶಾಧಿಕಾರಿ ಶೀ ಮಾಧವ ಬೆಳ್ಳಾರೆ, ಜೊತೆ ಕಾರ್ಯದರ್ಶಿ ಶ್ರೀ ಕಿಶೋರ್ ಕುಮಾರ್ ನೆಲ್ಲಿಕಟ್ಟೆ , ಸಂಸ್ಥೆಯ ನಿರ್ದೇಶಕರಾದ ಶ್ರೀ ಚಿದಾನಂದ ಬೈಲಾಡಿ, ಶ್ರೀ ಜಯರಾಮ ಚಿಲ್ತಡ್ಕ , ಶ್ರೀ ಮುರಳೀಧರ ಕೆಮ್ಮಾರ, ಪ್ರಾಚಾರ್ಯರಾದ ಶ್ರೀ ಪ್ರಕಾಶ್ ಪೈ, ಮಾಜಿ ಪ್ರಾಚಾರ್ಯರಾದ ಶ್ರೀ ಭವಾನಿ ಗೌಡ, ಮಾಜಿ ಕಛೇರಿ ಅಧೀಕ್ಷಕರಾದ ಶ್ರೀ ಉಮೇಶ್ ಯಂ, ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರಾದ ಶ್ರೀ ರವಿ ಮುಂಗ್ಲಿಮನೆ, ಗಣ್ಯರಾದ ಶ್ರೀ ಶ್ರೀಧರ ಕಣಜಾಲು, ಶ್ರೀ ಪ್ರವೀಣ್ ಕುಂಟ್ಯಾಣ, ಶ್ರೀ ಲಿಂಗಪ್ಪ ಗೌಡ ಭಾಗವಹಿಸಿದರು. ಸಂಸ್ಥೆಯ ಅಧ್ಯಾಪಕ, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಸಹಕರಿಸಿದರು.

ಅಖಿಲ ಭಾರತ ವೃತ್ತಿ ಪರೀಕ್ಷೆ -ಆಗಸ್ಟ್ 2024 – ಪರೀಕ್ಷಾ ಕೇಂದ್ರ ಅಧ್ಯಕ್ಷರು ಮತ್ತು ಕೇಂದ್ರ ವೀಕ್ಷಕರ ಭೇಟಿ

ಸ್ವಾತಂತ್ರ್ಯ ದಿನಾಚರಣೆ 2024 ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ

ನಮ್ಮ ಸಂಸ್ಥೆಯು ಅಖಿಲ ಭಾರತ ವೃತ್ತಿ ಪರೀಕ್ಷಾ ಕೇಂದ್ರವಾಗಿದ್ದು 2024 ಆಗಸ್ಟ್ 12 ರಿಂದ ಆಗಸ್ಟ್ 17 ವರೆಗೆ ಪರೀಕ್ಷೆ ನಡೆಯಿತು

ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ — ಕ್ಯಾಂಪಸ್ ಆಯ್ಕೆ

ಬೆಂಗಳೂರಿನ  ಪ್ರತಿಷ್ಠಿತ  ಟೊಯೋಟಾ  ಕಿರ್ಲೋಸ್ಕರ್  ಮೋಟಾರ್ಸ್  ಲಿಮಿಟೆಡ್  ಮತ್ತು ಪುತ್ತೂರಿನ   ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪ್ರತಿಷ್ಠಿತ ಸಂಸ್ಥೆಯಾದ ಮಾಸ್ಟರ್ ಪ್ಲಾನರಿ ಸಂಸ್ಥೆಯಿಂದ  ನಡೆಸಿದ ಕ್ಯಾಂಪಸ್  ಸಂದರ್ಶನದಲ್ಲಿ  ಕೊಂಬೆಟ್ಟು   ಶ್ರೀ  ಮಹಾಲಿಂಗೇಶ್ವರ  ಐಟಿಐಯ, ಇಲೆಕ್ಟ್ರೀಶಿಯನ್, ಇಲೆಕ್ಟ್ರಾನಿಕ್ಸ್  ಮೆಕಾನಿಕ್ ಮತ್ತು   ಡ್ರಾಪ್ಟ್ಸಮೆನ್ ಸಿವಿಲ್  ವೃತ್ತಿಯ ಒಟ್ಟು 63  ತರಬೇತಿದಾರರು ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ

“ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ ಕ್ಯಾಂಪಸ್ ಆಯ್ಕೆ”

ಬೆಂಗಳೂರಿನ ಗೃಹೋಪಯೋಗಿ ಉಪಕರಣಗಳ ಉತ್ಪಾದನೆಯಲ್ಲಿ ತೊಡಗಿರುವ ಪ್ರತಿಷ್ಠಿತ ಸ್ಟೋವ್ ಕ್ರಾಫ್ಟ್ ಸಂಸ್ಥೆಯು ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ ಯಲ್ಲಿ ದಿನಾಂಕ 17-06-2023 ಶನಿವಾರದಂದು ಕ್ಯಾಂಪಸ್ ಆಯ್ಕೆ ಕಾರ್ಯಕ್ರಮ ನಡೆಸಿತು. ಸದ್ರಿ ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ಐಟಿಐ, ಸುಳ್ಯದ ಕೆವಿಜಿ ಐಟಿಐ, ನರಿಮೊಗರು ಸರಕಾರಿ ಮಹಿಳಾ ಐಟಿಐ, ವಿಟ್ಲದ ಸರ್ಕಾರಿ ಐಟಿಐ , ವಿಟ್ಲದ ಸುಪ್ರಜಿತ್ ಐಟಿಐ, ಒಡಿಯೂರಿನ ಗುರುದೇವ ಐಟಿಐ, ಮತ್ತು ನಿಂತಿಕಲ್ಲಿನ ಪರಿವಾರ ಪಂಚಲಿಂಗೇಶ್ವರ ಐಟಿಐ ಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

“ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ -ಅಖಿಲ ಭಾರತ ವೃತ್ತಿ ಪರೀಕ್ಷೆ ಪ್ರಾರಂಭ”

ಶ್ರೀ ಮಹಾಲಿಂಗೇಶ್ವರ ಐಟಿಐಯ ಪರೀಕ್ಷಾ ಕೇಂದ್ರದಲ್ಲಿ ನಾಳೆ ಸೋಮವಾರ ದಿನಾಂಕ 3-7-2023 ರಿಂದ ಅಖಿಲ ಭಾರತ ವೃತ್ತಿ ಪರೀಕ್ಷೆ ಆರಂಭವಾಗಲಿದ್ದು ಪುತ್ತೂರು ಶ್ರೀ ಮಹಾಲಿಂಗೇಶ್ವರ ಐಟಿಐ, ವಿಟ್ಲದ ಸರ್ಕಾರಿ ಐಟಿಐ, ವಿಟ್ಲದ ಸುಪ್ರಜಿತ್ ಐಟಿಐ ಮತ್ತು ಒಡಿಯೂರಿನ ಗುರುದೇವಾನಂದ ಐಟಿಐ ಗಳ

ವಿವಿಧ ವೃತ್ತಿಗಳ ಒಟ್ಟು 596 ವಿದ್ಯಾರ್ಥಿಗಳು  ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

“ಶ್ರೀ ಮಹಾಲಿಂಗೇಶ್ವರ ಐಟಿಐ ‌: ಸ್ವಾತಂತ್ರ್ಯ ದಿನಾಚರಣೆ”

ಕೊಂಬೆಟ್ಟಿನ ಶ್ರೀ ಮಹಾಲಿಂಗೇಶ್ವರ ಐಟಿಐಯಲ್ಲಿ ಯಸ್ ಆರ್ ಕೆ ಲ್ಯಾಡರ್ಸ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೇಶವ ಅಮೈ ರವರು ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು. ಐಟಿಐ ವಿದ್ಯಾರ್ಥಿಗಳು ಉದ್ಯೋಗ ಅವಕಾಶಕ್ಕಾಗಿ ಕಾಯದೆ ಉದ್ಯಮಗಳನ್ನು ಸ್ಥಾಪಿಸಿ ಉದ್ಯೋಗದಾತರಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ಐಟಿಐ ನಿರ್ದೇಶಕರಾದ ಶ್ರೀ ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ಶ್ರೀ ಜಯರಾಮ ಚಿಲ್ತಡ್ಕ , ಅಂತಾರಾಷ್ಟ್ರೀಯ ಮಟ್ಟದ ಗೋಲ್ಡ್ಮನ್ ಸಾಕ್ಸ್ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಪ್ರದೀಪ್ ರಾಮಕೃಷ್ಣ ಗೌಡ, ಸಂಸ್ಥೆಯ ಸಲಹಾ ಸಮಿತಿಯ ಸದಸ್ಯರಾದ ವಿಶ್ರಾಂತ ಪ್ರಾಚಾರ್ಯರಾದ ಶ್ರೀ ಭವಾನಿ ಗೌಡ, ಶ್ರೀಮತಿ ವಚನಾ ಪ್ರದೀಪ್ , ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಉಮೇಶ್ ಯಂ, ಉಪಸ್ಥಿತರಿದ್ದರು. ಪ್ರಾಚಾರ್ಯರಾದ ಶ್ರೀ ಪ್ರಕಾಶ್ ಪೈ ಬಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ತರಬೇತಿ ಅಧಿಕಾರಿ ಶ್ರೀಮತಿ ವಸಂತಿ ವಂದನಾರ್ಪಣೆ ಸಲ್ಲಿಸಿದರು. ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿಗಳು , ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

“Sports meet  of the Old students by Alumni Association in our ITI on 09-04-2023 in  the presence of  Puttur Sri Mahalingeshwara temple  Trustee Sri Ramdas Gowda S, Correspondent Sri  U P Ramakrishna, Directors Sri Kishore Kumar & Sri  Jayaram Chilthadka ,  Retd Principal Sri Bhavani Gowda,  Ex O.S.& PRO Sri Umesh M, Principal Sri Prakash Pai B, Alumni association president Sri Harikrishna P N , Hon President Sri Pundalika Prabhu & Member Sri Santhosh Kumar.”

ಬೆಂಗಳೂರಿನ ಇಲೆಕ್ಟ್ರೀಕಲ್ ತ್ರಿಚಕ್ರ ವಾಹನ ಉತ್ಪಾದನೆ ಮಾಡುತ್ತಿರುವ ಅಲ್ಟಿಗ್ರೀನ್ ಡ್ರೈವ್ ಇಲೆಕ್ಟ್ರಿಕ್ ಕಂಪೆನಿಯವರು ದಿನಾಂಕ 22-06-2022 ಬುಧವಾರ ಕ್ಯಾಂಪಸ್ ಸಂದರ್ಶನ ನಡೆಸಿದರು. ಗೌಡ ವಿದ್ಯಾ ಸಂಘ (ರಿ) ಸುಳ್ಯದ ಜೊತೆ ಕಾರ್ಯದರ್ಶಿ ಮತ್ತು ಶ್ರೀ ಮಹಾಲಿಂಗೇಶ್ವರ ಐಟಿಐ ನಿರ್ದೇಶಕ ಶ್ರೀ ಕಿಶೋರ್ ಕುಮಾರ್ ನೆಲ್ಲಿಕಟ್ಟೆ ಶುಭಹಾರೈಸಿದರು. ಶ್ರೀ ಮಹಾಲಿಂಗೇಶ್ವರ ಐಟಿಐ, ಸರಕಾರಿ ಐಟಿಐ ನರಿಮೊಗರು, ಸರಕಾರಿ ಐಟಿಐ ವಿಟ್ಲ, ಒಡಿಯೂರು ಗುರುದೇವ ಐಟಿಐ, ಕೆವಿಜಿ ಐಟಿಐ ಸುಳ್ಯ, ಬೆಥನಿ ಐಟಿಐ ನೆಲ್ಯಾಡಿ, ಶ್ರೀ ಪಂಚಲಿಂಗೇಶ್ವರ ಐಟಿಐ ನಿಂತಿಕಲ್ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಸಂಚಾಲಕರಾದ ಶ್ರೀ ಯು. ಪಿ. ರಾಮಕೃಷ್ಣ ಅವರ ಮಾರ್ಗದರ್ಶನದ ಅನುಸಾರವಾಗಿ ಕಾರ್ಯಕ್ರಮ ನಡೆಯಿತು.

ದಿನಾಂಕ 13-12-2021 ರಂದು ವಿಟ್ಲದ ಸರ್ಕಾರಿ ಐಟಿಐ ಮತ್ತು ಸುಪ್ರಜಿತ್ ಐಟಿಐ ಮತ್ತು ಒಡಿಯೂರಿನ ಶ್ರೀ ಗುರುದೇವಾನಂದ ಐಟಿಐಯನ್ನು ಒಳಗೊಂಡಿರುವ ತಾಲೂಕು ಪರೀಕ್ಷಾ ಕೇಂದ್ರವಾದ ಶ್ರೀ ಮಹಾಲಿಂಗೇಶ್ವರ ಐಟಿಐ ಕೊಂಬೆಟ್ಟು ಪುತ್ತೂರಿನಲ್ಲಿ ಅಖಿಲ ಭಾರತ ವೃತ್ತಿ ಪರೀಕ್ಷೆ ಪ್ರಾರಂಭವಾಗಿದೆ.. ಪ್ರಥಮ ಮತ್ತು ದ್ವಿತೀಯ ವರ್ಷದ ಸಿವಿಲ್,ಇಲೆಕ್ಟ್ರೀಶಿಯನ್, ಇಲೆಕ್ಟ್ರಾನಿಕ್ಸ್ ಮೆಕಾನಿಕ್, ಪಿಟ್ಟರ್, ಮೆಕಾನಿಕ್ ಮೋಟಾರ್ ವೆಹಿಕಲ್ ಮತ್ತು ಮೆಕಾನಿಕ್ ಏರ್ ಕಂಡೀಷನಿಂಗ್ ಮತ್ತು ರೆಪ್ರಿಜರೇಶನ್ ವೃತ್ತಿಗಳ ಒಟ್ಟು 409 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ. ಪರೀಕ್ಷಾ ಕೇಂದ್ರದ ಅಧ್ಯಕ್ಷರಾದ ಮಳವಳ್ಳಿಯ ಸ್ಟಾರ್ಕ್ ಸಂಸ್ಥೆಯ ಸಹಾಯಕ ನಿರ್ದೇಶಕರಾದ ಶ್ರೀ ಸಯ್ಯದ್ ಅಕ್ಬರ್ ಪಾಶಾ ನಿರ್ದೇಶನದಲ್ಲಿ ಪರೀಕ್ಷೆ ನಡೆಯಿತು.